ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನವನ್ನು, ಕಲಾವಿದರನ್ನು ಹಾಳು ಮಾಡೋರೇ ಪ್ರೇಕ್ಷಕರು!

ಲೇಖಕರು :
ಅವಿನಾಶ್ ಬಿ.
ಶನಿವಾರ, ನವ೦ಬರ್ 16 , 2013

ಯಕ್ಷಗಾನ ರಂಗದಲ್ಲಿ ಅಧ್ವಾನಗಳಾಗುತ್ತಿವೆ, ಇದರಿಂದಾಗಿ ಕರಾವಳಿ ಮಣ್ಣಿನ ಕಣ ಕಣದಲ್ಲಿಯೂ ಹುದುಗಿ ಹೋಗಿರುವ ಅರೆಶಾಸ್ತ್ರೀಯವೂ-ಜಾನಪದೀಯವೂ ಆದ ಯಕ್ಷಗಾನಕ್ಕೆ ಕೆಟ್ಟ ಹೆಸರು ಬರುತ್ತಿದೆ ಮತ್ತು ದಾರಿ ತಪ್ಪುತ್ತಿದೆ ಅಂತ ಎಲ್ಲರೂ ಒಪ್ಪಿಕೊಂಡ ವಿಚಾರ.

ಅಗ್ರಗಣ್ಯ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಬೆಂಗಳೂರಿನಲ್ಲಿ ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸುತ್ತಾ ಒಂದು ಮಾತು ಹೇಳಿದ್ದರು. ಯಕ್ಷಗಾನೀಯವಲ್ಲದ್ದು ಕಂಡ ತಕ್ಷಣ ಕಲ್ಲು ಬಿಸಾಕಬೇಕು ಅಂತ!

ಈ ಮಾತು ಅವರೇನೂ ಬಾಯಿ ಮಾತಿಗೆ ಹೇಳಿರಲಿಲ್ಲ. ಅದಕ್ಕೆ ತಕ್ಕ ವಿವರಣೆಯನ್ನೂ ಕೊಟ್ಟಿದ್ದರು.

ಈಗ ರಂಗದಲ್ಲಿ ನಿಯಂತ್ರಕ ಶಕ್ತಿ (ಕಂಟ್ರೋಲಿಂಗ್ ಕ್ಯಾರೆಕ್ಟರ್) ಎಂಬುದು ಇಲ್ಲದಂತಾಗಿದೆ. ಯಕ್ಷಗಾನದ ರಂಗವೇರಿದಾಗ ಅದರ ಇತಿಮಿತಿಯೊಳಗೆಯೇ ಇರಬೇಕು, ಅವರು ಆ ಸೀಮಾ ರೇಖೆಯನ್ನು ದಾಟಿದ ತಕ್ಷಣ ಈಚೆಗೆ ಎಳೆಯುವ ಒಂದು ಶಕ್ತಿ ಅಲ್ಲಿರಬೇಕು ಎಂದಿದ್ದಾರವರು.

ಈಗೇನಾಗುತ್ತಿದೆ? ಯಕ್ಷಗಾನದ ವೇದಿಕೆಯಲ್ಲಿ ಸಿನಿಮಾದಂತೆ ಹಾಡುಗಳನ್ನು ಎಳೆ ಎಳೆದು ಹಾಡಲಾಗುತ್ತದೆ; ಪೌರಾಣಿಕ ವೇಷಧಾರಿಗಳೂ ಸಮಕಾಲೀನ ರಾಜಕೀಯವನ್ನು ರಂಗಕ್ಕೆಳೆದು ತರುತ್ತಾರೆ, ಆಕ್ಷೇಪಾರ್ಹ ಎನ್ನಬಹುದಾದ, ಅಥವಾ ನೇರವಾಗಿ ಅಶ್ಲೀಲ ಅನ್ನಿಸಬಹುದಾದ ಹಾಸ್ಯದ ತುಣುಕುಗಳೂ ರಂಗದ ಮೇಲೆ ಸರಿದುಹೋಗುತ್ತವೆ, ಅಸಮರ್ಪಕವಾದ (ಪೂರ್ಣ ಸುತ್ತು ಇಲ್ಲದ) ದಿಗಿಣ ಹಾಕಿ, ಇದುವೇ ಯಕ್ಷಗಾನದ ದಿಗಿಣ ಎಂಬಂತೆ ಬಿಂಬಿತವಾಗುತ್ತಿದೆ, ಕಥಾನಕವೊಂದು ಆರಂಭವಾಗುವಾಗ ಯಾವ ಕಾಲ (ಗತಿ), ಮುಕ್ತಾಯವಾಗುವುದು ಯಾವ ಗತಿಯಲ್ಲಿ ಎಂಬ ವಿವೇಚನೆಯಿಲ್ಲದೆಯೇ ಮೂರು-ನಾಲ್ಕನೇ ಕಾಲದಲ್ಲಿಯೇ ಪ್ರಸಂಗವೊಂದು ಆರಂಭವಾಗಿಬಿಡುತ್ತದೆ.

ಹೀಗೆಲ್ಲಾ ಆಗುವಾಗ, ಪ್ರಜ್ಞಾವಂತ ಪ್ರೇಕ್ಷಕರೇನೋ ರಂಗದಲ್ಲಿ ತಪ್ಪುಗಳಾಗುವುದು ಸಹಜ, ಒಂದು ಬಾರಿಯ ತಪ್ಪು ಮನ್ನಿಸೋಣ ಅಂತ ಸುಮ್ಮನಿರಬಹುದು. ಆದರೆ ಅಪ್ರಜ್ಞಾವಂತ ಪ್ರೇಕ್ಷಕರು? ಬಾಯಿ ತುಂಬಾ ಶಿಳ್ಳೆ, ಚಪ್ಪಾಳೆಗಳೊಂದಿಗೆ ಇಂತಹಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡುವಂತೆ ಕಲಾವಿದರನ್ನು ಪ್ರೇರೇಪಿಸುತ್ತಾರೆ.

ಹೀಗಾಗಿ ಕೋಳ್ಯೂರು ಅವರು ವಿಷಾದದಿಂದಲೇ ಹೇಳಿದ್ದು - ಯಕ್ಷಗಾನೀಯವಲ್ಲದ್ದು ರಂಗದ ಮೇಲೆ ಕಾಣಿಸಿಕೊಂಡಾಕ್ಷಣ ಚಪ್ಪಾಳೆ ಹೊಡೆಯುವ ಬದಲು ಕಲ್ಲು ಹೊಡೆಯಬೇಕು ಅಂತ. ಯಾಕೆಂದರೆ ಆಡಿದ್ದೇ ಆಟ ಎಂಬಂತಾಗಿರುವುದರಿಂದಾಗಿ ಯಕ್ಷಗಾನವು ಕೂಡ ನಾಶವಾಗುವುದು ಸಾಧ್ಯವಿಲ್ಲದೇ ಹೋದರೂ, ಹಾದಿ ತಪ್ಪುತ್ತಿದೆ. ಮತ್ತು ಮುಂದಿನ ಪೀಳಿಗೆಯು ಕೂಡ "ಇದುವೇ ಯಕ್ಷಗಾನ" ಅಂತ ಪಕ್ಕಾ ತಿಳಿದುಕೊಂಡುಬಿಟ್ಟರೆ, ಅಲ್ಲಿಗೆ ಯಕ್ಷಗಾನದ ಆ ಸೌಂದರ್ಯವೊಂದು ಅಳಿವಿನಂಚಿನಲ್ಲಿರುವ ವಸ್ತು-ವಿಷಯಗಳ ಪಟ್ಟಿಗೆ ಸೇರಿಹೋಗುತ್ತದೆ. ನೀವೇನಂತೀರಿ?



ಕೃಪೆ : http://vijaykarnataka.COM


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ